ಇಂಜಿನಯರಿಂಗ್ನ ಕೊನೆಯ ವರ್ಷ. ಲ್ಯಾಬ್ ಮುಗಿಸಿಕೊಂಡು ರೂಮ್ ಕಡೆಗೆ ಹೋಗುತ್ತಿದ್ದೆ. ಮಧ್ಯಾಹ್ನವಾಗಿತ್ತು, ಊಟದ ಸಮಯ. ಕಾಲೇಜ್ ಕ್ಯಾಂಪಸ್ನಲ್ಲಿ ಎಷ್ಟೊ ಹುಡುಗ-ಹುಡುಗಿಯರು. ಆದರೆ ಕಣ್ಣಿಗೆ ಬೀಳೋದು, ಹುಡುಗಿಯರು ಮಾತ್ರ. ಆ ವಯಸ್ಸಿನ ಲಕ್ಷಣಗಳಲ್ಲಿ ಇದೊಂದು. ಉದ್ದನೆಯ ಜಡೆ, ಜೀನ್ಸ್ ಪ್ಯಾಂಟ್-ಟೀ ಶರ್ಟ್ ಹಾಕಿಕೊಂಡಿದ್ದ ಅವಳು ಕ್ಲಾಸ್ ಮುಗಿಸಿಕೊಂಡು ಮನೆಗೆ ಹೊರಟಿದ್ದಳು. ಮೊಟ್ಟ ಮೊದಲ ಸಲ ಅವಳನ್ನು ನೋಡಿದ್ದೆ ಅವತ್ತು. ಕಣ್ಣಿನಿಂದ ಮರೆಯಾಗುವವರೆಗೂ ಅವಳನ್ನೇ ನೋಡುತ್ತಿದ್ದೆ -
ನಿನ ಹೆಜ್ಜೆಗೆ ಸನಿಹ
ನಾನಿಲ್ಲೆ ಬರುತಿದ್ದೆ
ನನ್ನೆಡೆಗೆ ನೋಡಬಾರದೆ
ನಗುಮುಖದ ಚೆಲುವೆ
ಅಂತ ಅನ್ನುತ್ತಾ ರೂಮ್ ಕಡೆಗೆ ನಡೆದೆ. ಅಂದಿನಿಂದ, ಕ್ಯಾಂಟೀನ್, ಗುಡಿ, ಲ್ಯಾಬ್, ಜೆರಾಕ್ಸ್ ಹೀಗೆ ಕ್ಯಾಂಪಸ್ನಲ್ಲಿ ಎಲ್ಲಿ ಹೋದರು, ಅವಳೆಲ್ಲಾದರು ಕಾಣಿಸುತ್ತಾಳೆನೊ ಅಂತಾ ನೋಡುತಿದ್ದೆ. ಆಗಾಗ ಸಾಯಂಕಾಲ ಬಾಸ್ಕೆಟ್ ಬಾಲ್ ಮೈದಾನದಲ್ಲಿ, ಮಧ್ಯಾಹ್ನ ಅವಳ ಡಿಪಾರ್ಟ್ಮೆಂಟಿನ ಬಳಿ, ಕಾಲೇಜಿನ ಮುಖ್ಯದ್ವಾರದ ಹತ್ತಿರ ಅವಳ ಸ್ಕೂಟಿಯಲ್ಲಿ ಕಾಣಿಸುತಿದ್ದಳು. ಹೇಗಾದರೂ ಮಾಡಿ ಪರಿಚಯ ಮಾಡಿಕೊಳ್ಳೊಣಾ ಅಂತ ಅನಿಸುತಿತ್ತಾದರು, ನಾನಾಗಿಯೇ ಯಾವ ಪ್ರಯತ್ನಕ್ಕೂ ಕೈ ಹಾಕಲಿಲ್ಲ. ದಿನಗಳು ಕಳೆದವು, ಪರಿಚಯಕ್ಕೆಂದು ಅವಕಾಶವೇ ಮೂಡಿ ಬರಲಿಲ್ಲ.
ಪ್ರತಿವರ್ಷದಂತೆ ಆ ವರ್ಷವೂ ಕಾಲೇಜ್ ಡೇ ಫಂಕ್ಶನ್ನ ಸಂಭ್ರಮ ಶುರುವಾಯಿತು. ಇದು ನಡೆಯುವುದು ೪-೫ ದಿನಗಳು.ಒಂದೊಂದು ದಿನ ಒಂದೊಂದು ರೀತಿಯ ಮನೋರಂಜನೆಯ ಕಾರ್ಯಕ್ರಮಗಳು, ಸೃಜನಾತ್ಮಕ ಸ್ಪರ್ಧೆಗಳಿರುತ್ತವೆ.ಫಂಕ್ಶನ್ನ ಮೊದಲ ದಿನ. ಅಂದು ಸಂಜೆ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಗಾಯನ ಕಾರ್ಯಕ್ರಮ ಇತ್ತು. ಗೆಳೆಯರೆಲ್ಲಾ ಮೈದಾನದಲ್ಲಿ ನಿಂತಾಗ ಸಿಳ್ಳೆ ಹೊಡೆಯುವುದು, "ಮಾರಿ ಕಣ್ಣು-ಹೊರಿ ಮ್ಯಾಗೆ" ಅಂತ ಹಾಡುಗಳಿಗೆ ತಾಳ ಹಾಕುವುದು, ಮೈದಾನದ ತುಂಬಾ ಹೀಗೆ ಗಜಿ-ಬಿಜಿ, ಗೊಜು-ಗದ್ದಲ, ಗೆಳೆಯರೊಂದಿಗೆ ಮಜವೊ-ಮಜ. ಆ ಸಂಜೆಯ ಗಾಯನ ಕಾರ್ಯಕ್ರಮದಲ್ಲಿ ಅವಳು ಭಾಗವಹಿಸಿದ್ದಳು. ಅಂದು ಅವಳು ಹಾಡಿದ್ದು "ತುಂತುರು ಅಲ್ಲಿ ನೀರ ಹಾಡು...ಕಂಪನ ಇಲ್ಲಿ ಪ್ರೀತಿ ಹಾಡು..."; ಅದ್ಬುತ ಕಂಠ. ಗಜಿ-ಬಿಜಿ ಅಂತಿದ್ದ ಮೈದಾನ ಆ ಹಾಡು ಮುಗಿಯುವವರೆಗೆ ನಿಶ್ಬದ್ಧವಾಗಿ ಹೋಯಿತು. ನಿಂತಲ್ಲೇ ತಲ್ಲೀನನಾಗಿ ಕೇಳಿದೆ-ನೋಡಿದೆ. ಬಹುಶಃ ಅದೇ ಕ್ಷಣವನಿಸುತ್ತೆ, ಅವಳಿಗೆ ಸ್ವಲ್ಪ ಬಿದ್ದೆ ಕೂಡ. ಯಾವತ್ತೂ ಕೇಳಿರದ ಆ ಹಾಡನ್ನು, ನಂತರದ ೪-೫ ದಿನ, ಪದೇ-ಪದೇ ಕೇಳಿಬಿಟ್ಟೆ. ಆ ವಿಶ್ವ - "ಲೇ, ಎಷ್ಟು ಸಲ ಕೇಳುತಿಯಲೇ ಕಿರಣ" ಅಂತಾ ಬೈದ.
ಅವತ್ತು ನನ್ನ ಡೈರಿಯಲ್ಲಿ ಬರೆದಿದ್ದೆ -
ಏ ಮೈಸೂರ ಹುಡುಗಿ
ನನ್ನ ಭವಿಷ್ಯವಾಣಿಯಲ್ಲಿ
ಸದಾ ನಿನ್ನ ವಾಣಿ ಇರಲಿ
ಮರುದಿನ, ಸುಮಾರು ಹನ್ನೊಂದು ಗಂಟೆಗೆ ಗೆಳೆಯರೊಂದಿಗೆ ಕಾಲೇಜ್ಗೇ ಹೋದೆ. ಕೊನೆಗೂ ನಾ ಪರಿಚಯಕ್ಕಾಗಿ ಕಾಯುತ್ತಿದ್ದ ದಿನ ಬಂದೆ ಬಿಟ್ಟಿತು. ಆಲ್ಲಿಗೆ ಹೋದಾಗ ಅವತ್ತು "ಫ್ರೆಂಡ್ಶಿಪ್ ಡೇ" ಆಚರಣೆಯಿದೆ ಅಂತಾ ಗೊತ್ತಾಯಿತು. ಒಳ್ಳೆಯ ಮಹೂರ್ತ ಅಂತ, ಕೂಡಲೇ ಒಂದು ಹಳದಿ ಗುಲಾಬಿಯ ಜೊತೆ, ಕಾರ್ಡಿನಲ್ಲಿ -
ನಿನ್ನೆ ನಾ ಕೇಳಿದೆ
ನೀ ಹಾಡಿದ ತುಂತುರು
ತುಂಬಿತ್ತು ಅದರಲ್ಲಿ
ನಿನ ಹೆಜ್ಜೆಗೆ ಸನಿಹ
ನಾನಿಲ್ಲೆ ಬರುತಿದ್ದೆ
ನನ್ನೆಡೆಗೆ ನೋಡಬಾರದೆ
ನಗುಮುಖದ ಚೆಲುವೆ
ಅಂತ ಅನ್ನುತ್ತಾ ರೂಮ್ ಕಡೆಗೆ ನಡೆದೆ. ಅಂದಿನಿಂದ, ಕ್ಯಾಂಟೀನ್, ಗುಡಿ, ಲ್ಯಾಬ್, ಜೆರಾಕ್ಸ್ ಹೀಗೆ ಕ್ಯಾಂಪಸ್ನಲ್ಲಿ ಎಲ್ಲಿ ಹೋದರು, ಅವಳೆಲ್ಲಾದರು ಕಾಣಿಸುತ್ತಾಳೆನೊ ಅಂತಾ ನೋಡುತಿದ್ದೆ. ಆಗಾಗ ಸಾಯಂಕಾಲ ಬಾಸ್ಕೆಟ್ ಬಾಲ್ ಮೈದಾನದಲ್ಲಿ, ಮಧ್ಯಾಹ್ನ ಅವಳ ಡಿಪಾರ್ಟ್ಮೆಂಟಿನ ಬಳಿ, ಕಾಲೇಜಿನ ಮುಖ್ಯದ್ವಾರದ ಹತ್ತಿರ ಅವಳ ಸ್ಕೂಟಿಯಲ್ಲಿ ಕಾಣಿಸುತಿದ್ದಳು. ಹೇಗಾದರೂ ಮಾಡಿ ಪರಿಚಯ ಮಾಡಿಕೊಳ್ಳೊಣಾ ಅಂತ ಅನಿಸುತಿತ್ತಾದರು, ನಾನಾಗಿಯೇ ಯಾವ ಪ್ರಯತ್ನಕ್ಕೂ ಕೈ ಹಾಕಲಿಲ್ಲ. ದಿನಗಳು ಕಳೆದವು, ಪರಿಚಯಕ್ಕೆಂದು ಅವಕಾಶವೇ ಮೂಡಿ ಬರಲಿಲ್ಲ.
ಪ್ರತಿವರ್ಷದಂತೆ ಆ ವರ್ಷವೂ ಕಾಲೇಜ್ ಡೇ ಫಂಕ್ಶನ್ನ ಸಂಭ್ರಮ ಶುರುವಾಯಿತು. ಇದು ನಡೆಯುವುದು ೪-೫ ದಿನಗಳು.ಒಂದೊಂದು ದಿನ ಒಂದೊಂದು ರೀತಿಯ ಮನೋರಂಜನೆಯ ಕಾರ್ಯಕ್ರಮಗಳು, ಸೃಜನಾತ್ಮಕ ಸ್ಪರ್ಧೆಗಳಿರುತ್ತವೆ.ಫಂಕ್ಶನ್ನ ಮೊದಲ ದಿನ. ಅಂದು ಸಂಜೆ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಗಾಯನ ಕಾರ್ಯಕ್ರಮ ಇತ್ತು. ಗೆಳೆಯರೆಲ್ಲಾ ಮೈದಾನದಲ್ಲಿ ನಿಂತಾಗ ಸಿಳ್ಳೆ ಹೊಡೆಯುವುದು, "ಮಾರಿ ಕಣ್ಣು-ಹೊರಿ ಮ್ಯಾಗೆ" ಅಂತ ಹಾಡುಗಳಿಗೆ ತಾಳ ಹಾಕುವುದು, ಮೈದಾನದ ತುಂಬಾ ಹೀಗೆ ಗಜಿ-ಬಿಜಿ, ಗೊಜು-ಗದ್ದಲ, ಗೆಳೆಯರೊಂದಿಗೆ ಮಜವೊ-ಮಜ. ಆ ಸಂಜೆಯ ಗಾಯನ ಕಾರ್ಯಕ್ರಮದಲ್ಲಿ ಅವಳು ಭಾಗವಹಿಸಿದ್ದಳು. ಅಂದು ಅವಳು ಹಾಡಿದ್ದು "ತುಂತುರು ಅಲ್ಲಿ ನೀರ ಹಾಡು...ಕಂಪನ ಇಲ್ಲಿ ಪ್ರೀತಿ ಹಾಡು..."; ಅದ್ಬುತ ಕಂಠ. ಗಜಿ-ಬಿಜಿ ಅಂತಿದ್ದ ಮೈದಾನ ಆ ಹಾಡು ಮುಗಿಯುವವರೆಗೆ ನಿಶ್ಬದ್ಧವಾಗಿ ಹೋಯಿತು. ನಿಂತಲ್ಲೇ ತಲ್ಲೀನನಾಗಿ ಕೇಳಿದೆ-ನೋಡಿದೆ. ಬಹುಶಃ ಅದೇ ಕ್ಷಣವನಿಸುತ್ತೆ, ಅವಳಿಗೆ ಸ್ವಲ್ಪ ಬಿದ್ದೆ ಕೂಡ. ಯಾವತ್ತೂ ಕೇಳಿರದ ಆ ಹಾಡನ್ನು, ನಂತರದ ೪-೫ ದಿನ, ಪದೇ-ಪದೇ ಕೇಳಿಬಿಟ್ಟೆ. ಆ ವಿಶ್ವ - "ಲೇ, ಎಷ್ಟು ಸಲ ಕೇಳುತಿಯಲೇ ಕಿರಣ" ಅಂತಾ ಬೈದ.
ಅವತ್ತು ನನ್ನ ಡೈರಿಯಲ್ಲಿ ಬರೆದಿದ್ದೆ -
ಏ ಮೈಸೂರ ಹುಡುಗಿ
ನನ್ನ ಭವಿಷ್ಯವಾಣಿಯಲ್ಲಿ
ಸದಾ ನಿನ್ನ ವಾಣಿ ಇರಲಿ
ಮರುದಿನ, ಸುಮಾರು ಹನ್ನೊಂದು ಗಂಟೆಗೆ ಗೆಳೆಯರೊಂದಿಗೆ ಕಾಲೇಜ್ಗೇ ಹೋದೆ. ಕೊನೆಗೂ ನಾ ಪರಿಚಯಕ್ಕಾಗಿ ಕಾಯುತ್ತಿದ್ದ ದಿನ ಬಂದೆ ಬಿಟ್ಟಿತು. ಆಲ್ಲಿಗೆ ಹೋದಾಗ ಅವತ್ತು "ಫ್ರೆಂಡ್ಶಿಪ್ ಡೇ" ಆಚರಣೆಯಿದೆ ಅಂತಾ ಗೊತ್ತಾಯಿತು. ಒಳ್ಳೆಯ ಮಹೂರ್ತ ಅಂತ, ಕೂಡಲೇ ಒಂದು ಹಳದಿ ಗುಲಾಬಿಯ ಜೊತೆ, ಕಾರ್ಡಿನಲ್ಲಿ -
ನಿನ್ನೆ ನಾ ಕೇಳಿದೆ
ನೀ ಹಾಡಿದ ತುಂತುರು
ತುಂಬಿತ್ತು ಅದರಲ್ಲಿ
ಸ,ರಿ,ಗ,ಮ,ಪ ಗಳ ವಿದ್ವತ್ತು
ಸಂಗೀತ ನಿನ್ನ ಮೆರಗು
ನಾ ಕೇಳುಗನಿಗೆ ಅದೇ ವರವು
ಆಗುವೆಯಾ ನನ ಗಳತಿ
ಓ ಸಂಗೀತದ ಒಡತಿ
ಎಂದು ಬರೆದು, ನನಗೆ ಪರಿಚಯವಿದ್ದ ಹುಡುಗಿಯೊಬ್ಬಳಿಂದ ಕೊಟ್ಟು ಕಳಿಸಿದೆ. ಕೆಲ ಕ್ಷಣಗಳ ಕಾಲ, ಅವಳು ಹೇಗೆ ಪ್ರತಿಕ್ರಿಯಿಸುತ್ತಾಳೊ ಅನ್ನೊ ಆತಂಕ ಆವರಿಸಿತು. ಹಾಗೇನೂ ಆಗಲಿಲ್ಲ. ನಾನು ಯಾರು ಅಂತಾ ಅವಳಿಗೆ ತಿಳಿದಿರಲಿಲ್ಲವಾದರೂ, ಅವಳು ಸಂತೋಷದಿಂದ ನನ್ನ ಗೆಳೆತನದ ಪತ್ರವನ್ನು ಸ್ವೀಕರಿಸಿದಳು.ನಾನು ಇ-ಮೇಲ್ ಐಡಿ ಕೇಳಿದ್ದರಿಂದ ಅದನ್ನು ಕೊಟ್ಟು ಕಳಿಸಿದ್ದಳು. ಒಮ್ಮೆ ಸುತ್ತಲೂ ಕಣ್ಣಾಡಿಸಿ ನೋಡಿದಳಾದರು, ಇವನೇ ಅಂತಾ ಗೊತ್ತಿಡಿಯೊಕೆ ಹೇಗೆ ಆಗೂತ್ತೆ! ಅಲ್ಲಿ ನಡೆದಿದ್ದ ಬೇರೆ ಕಾರ್ಯಕ್ರಮಗಳನ್ನು ನೋಡಿ, ಬೇರೆ-ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಆದರೆ ನನ್ನ ಮನಸ್ಸೆಲ್ಲಾ ಅವಳು, ಆ ಕಾರ್ಡ್, ಆ ಗುಲಾಬಿಗಳಿಂದಲೇ ತುಂಬಿ ಹೋಗಿತ್ತು. ಅವತ್ತಿನಿಂದ, ನನಗವಳು - ಮುಖ ಪರಿಚಯ, ನಾನವಳಿಗೆ - ಮುಖ ಕಾಣದ ಪರಿಚಯ. ನನ್ನಗೊಂದು ರೀತಿಯ ಸಂತೋಷ.
ಕಾಲೇಜ್ ಡೇ ಫಂಕ್ಶನ್ ಮುಗಿಯಿತು. ಮತ್ತೆ ಕ್ಲಾಸ್ಗಳು ಶುರುವಾದವು. ಜೊತೆಗೆ, ನನ್ನ ಗಮನ ಪ್ರೊಜೆಕ್ಟ್ ಕೆಲಸದ ಕಡೆಗೆ ಹರಿಯಿತು. ನನಗೆ ಆ ಸಮಯದಲ್ಲಿ ನನ್ನ ಕೊರ್ಸ್ ಮುಗಿಸುವುದೊಂದೆ ಪ್ರಥಮ ಆದ್ಯತೆಯಾಗಿತ್ತು. ಕೊನೆಯ ವರ್ಷವಾಗಿದ್ದರಿಂದ ಎಲ್ಲಾ ಸರಿಯಾಗಿ ಮುಗಿಸಿಕೊಂಡುಕೊಂಡು ಹೋಗುವ ಜವಾಬ್ದಾರಿ ಹೆಗಲ ಮೇಲೆ ಇತ್ತು. ದಿನಗಳು ಹಾಗೇ ಉರುಳಿದವು. ನನಗವಳ ಇ-ಮೇಲ್ ಐಡಿ ಗೊತ್ತಿದ್ದರಿಂದ ಮೇಲ್ನಲ್ಲೆ ಆಗಾಗ ಮಾತುಕತೆಯಾಗುತ್ತಿತ್ತು. ಕೊನೆಯ ಸೆಮಿಸ್ಟರಿನ ಪರೀಕ್ಷೆಗಳು ಬೀಳ್ಕೊಡುಗೆಯ ಆಲಿಂಗನ ಕೊಡಲು ಬಂದವು. ನನಗವಳ ಫೋನ್ ನಂಬರ್ ಗೊತ್ತಿರಲ್ಲಿಲ್ಲ. ಅವಳ ತರಗತಿಯ ಗೆಳಯನ್ನೊಬ್ಬನಿಗೆ, ನಾನು ಅವಳನ್ನು ಭೇಟಿಯಾಗುವ ಅವಶ್ಯಕತೆಯಿದೆ ಎಂದು ತಿಳಿಸಿದೆ. ಸಹಜವಾಗಿ ಅವನು ಅಪರಿಚಿತನೊಬ್ಬನಿಗೆ ಫೊನ್ ನಂಬರ್ ಕೊಡಲು ನಿರಾಕರಿಸಿದ. ಆದರೆ, ಅವಳಿಗೆ ಫೊನ್ ಮಾಡಿ ಮಾತಾಡಿಸಲು ಒಪ್ಪಿ, ಫೋನ್ ಮಾಡಿ ರಿಸಿವರ್ ನನ್ನ ಕೈಯಲ್ಲಿತ್ತ. "ಹೇ, ಪರೀಕ್ಷೇಗಳು ಮುಗಿಯುತ್ತಿವೆ. ಮುಗಿದ ನಂತರ ನಾನು ಊರಿಗೆ ಹೊರಟು ಹೋಗುತ್ತೇನೆ. ನನ್ನ ಹತ್ತಿರ ನಿನ್ನ ಫೊನ್ ನಂಬರ್ ಇಲ್ಲಾ. ಅದಕ್ಕೆ, ಬೇಕಿತ್ತು" ಅಂದೆ. "ಆಯ್ತು, ಅವನ ಹತ್ತಿರ ಇಸ್ಕೊ" ಅಂತ ಹೇಳಬಹುದೇನೋ ಅಂತಾ ಅಂದುಕೊಂಡಿದ್ದೆ. ಅವಳು - "ಬರೆದು ಕೊ ಹೇಳುತೀನಿ" ಅಂದಳು. ಖುಶಿ ಆಯಿತು. ನಂಬರ್ ಬರೆದುಕೊಂಡು "ಸಾಧ್ಯವಾದರೇ ಸಿಗುತ್ತೇನೆ" ಅಂತಾ ಹೇಳಿ ರಿಸೀವರ್ ಇಟ್ಟೆ.
ಕೊನೆಯ ಸೆಮಿಸ್ಟರ್ನ ಕೊನೆಯ ಪರೀಕ್ಷೆ.ಅದಾದ ನಂತರ, ೨ ದಿನಗಳ ನಂತರ ಮರಳಿ ಗೂಡಿಗೆ, ಅಂದರೆ ಊರಿಗೆ, ಪ್ರಯಾಣ. ಅವಳನ್ನೆಂದು ಭೇಟಿನೇ ಆಗಿರಲಿಲ್ಲಾ. ಬರೀ ಫೋನ್ನಲ್ಲಿ ಮಾತಾಡಿದ್ದಷ್ಟೇ. ನಾನು ಇಂತವನೇ ಅಂತಾ ಅವಳಿಗೇ ಹೇಳಬೇಕೆನಿಸಿತು, ಅವಳು ಯಾವ ರೀತಿ ಅದಕ್ಕೆ ಸ್ಪಂದಿಸುತ್ತಾಳೆ ಅಂತಾ ನೋಡಬೇಕಿತ್ತು. ಒಂದೆಡೆ, ಪರೀಕ್ಷೆಗಳು ಮುಗಿಯುತಿದ್ದಿದ್ದ ನಿರಾಳತೆ. ಇನ್ನೊಂದೆಡೆ, ನಾ - ಸ್ವಲ್ಪ ಬಿದ್ದಿರುವ - ಹುಡುಗಿಯ ಎದುರು ಹೋಗಿ ನಿಲ್ಲುತ್ತಿರುವ ಮೊದಲ ಕ್ಷಣದ, ಮೊದಲ ಅನುಭವದ ಆತಂಕ, ಸಂತೋಷ, ಭಾವಪರವಶತೆ. ಅಂದು, ಪರೀಕ್ಷೆ ಮುಗಿದ ನಂತರ ಅವಳ ಡಿಪಾರ್ಟ್ಮೆಂಟಿನ ಪರೀಕ್ಷೆಯ ಹಾಲ್ ಕಡೆಗೆ ಹೆಜ್ಜೆ ಇಟ್ಟೆ. ನನಗವಳ ಮುಖ ಪರಿಚಯವಿತ್ತು. ಅವಳು ಹಾಲ್ನಿಂದ ಹೊರಗೆ ಬರುತ್ತಿದ್ದಳು. ಅವಳೆಡೇ ದಿಟ್ಟ ಹೆಜ್ಜೆ ಇಟ್ಟೆನಾದರು, ಮೊದಲ ಪರಿಚಯ ನೀಡುವುದರಲ್ಲಿ ಸ್ವಲ್ಪ ಕಷ್ಟವೇ ಪಟ್ಟೆ. ನಾನು ಅಂದುಕೊಂಡ ಹಾಗೇ ಅಂತಹ ಖಾಸ್ ಪ್ರತಿಕ್ರಿಯೆ ಏನು ಸಿಗಲಿಲ್ಲ. ಅವಳು ಸಹಜವಾಗಿ ನಗುಮುಖದಿ, ಪರಸ್ಪರ ಕುಶಲ-ಕ್ಷೇಮದ ಎರಡು ಮಾತಾಡಿ ಅಲ್ಬಿದಾ ಎಂದು ಹೊರಟಳು. ಮನಸ್ಸು -
ಗೆಳತಿ,
ನಿನ್ನ ಈ ಸುಂದರ ನಡೆ
ಬರಲಿ ನನ್ನಯ ಕಡೆ
ಅಂತ ನುಡಿಯುತ್ತಿತ್ತು. ಕಾಲೇಜು ಹಂತ ಮುಗಿಯಿತು. ಮರಳಿ ಊರಿಗೆ ಬಂದೆ. ಕ್ಯಾಂಪಸ್ನಲ್ಲಿ ನನಗೆ ಆಗಲೇ ಕೆಲಸ ಸಿಕ್ಕಿತ್ತು. ಕೆಲಸಕ್ಕೆ ಸೇರಲು ಇನ್ನೂ ಒಂದು ತಿಂಗಳ ಸಮಯವಿತ್ತು. ಆದರೆ, ದುರಾದೃಷ್ಟವಶಾತ್ ಅಮೇರಿಕಾದ ಅರ್ಥಿಕ ಹಿಂಜರಿತದಿಂದಾಗಿ ನನ್ನ ಕೆಲಸ ೮-೯ ತಿಂಗಳುಗಳವರೆಗೆ ಮುಂದೆ ಬಿತ್ತು. ಬೇರೆ ಕೆಲಸ ಹುಡುಕೋಣ ಎಂದು ಮೈಸೂರಿಗೆ ಮರಳಿ ಬಂದೆ. ನನ್ನ ಹಾಗೇ ಕೆಲಸ ಕಳೆದುಕೊಂಡ ನನ್ನ ಕೆಲವು ಗೆಳೆಯರು ಕೂಡ ಮೈಸೂರಿಗೆ ಬಂದಿದ್ದರು. ಅದೇ ತಿಂಗಳಿನಲ್ಲಿ ನಾನು ಓದಿದ ಕಾಲೇಜಿನಲ್ಲಿ ಒಂದು ವ್ಯಕ್ತಿತ್ವ ವಿಕಸನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾನು ಅದರಲ್ಲಿ ಭಾಗವಹಿಸಿದೆ. ನನ್ನ ಅಚ್ಚರಿಗೆ, ಅದರಲ್ಲಿ ಅವಳೂ ಭಾಗವಹಿಸಿದ್ದಳು. ಆ ಕಾರ್ಯಕ್ರಮದ ಮೊದಲ ದಿನದಂದು ಹೊರಗೆ ಬಂದಾಗ ನಾನು-ಅವಳು ಜೊತೆಗೆ ಬಂದಿದ್ದೇವು. ಕೊನೆಯ ಪರೀಕ್ಷೇ ಮುಗಿದ ನಂತರ ಮಾತಾಡಿದ್ದು ಮತ್ತೆಂದೂ ಮಾತಾಡಿರಲಿಲ್ಲ, ಇ-ಮೇಲ್ ಕೂಡಾ ಮಾಡಿರಲಿಲ್ಲ. ಇಬ್ಬರಲ್ಲೂ ಒಂದು ರೀತಿಯ ಸಂಕೋಚ ತುಂಬಿಕೊಂಡಿತ್ತು. ಅಕ್ಕ-ಪಕ್ಕದಲ್ಲೇ ನಡೆದುಕೊಂಡು ಹೋಗುತ್ತಿದ್ದರು, ಮಾತು ಬರುತ್ತಿರಲಿಲ್ಲ. ಕೊನೆಗೆ ನಾನೇ - "ಹಾಯ್" ಎಂದೇ. ಅಲ್ಲಿಂದ ಮಾತುಗಳು ಶುರುವಾದವು. ಆ ಒಂದೇ ದಿನದಲ್ಲಿ ನನಗವಳು ಎಷ್ಟೊ ಪರಿಚಯವಾಗಿಬಿಟ್ಟಳು. ಮೈಸೂರಿನಲ್ಲೇ ಉಳಿದ ಅದೇ ದಿನಗಳಲ್ಲಿ ಅವಳ ಸಂಗೀತ ಕಛೇರಿಗಳಿಗೆ ಹೋಗುತಿದ್ದೆ. ಕೆಲವೊಮ್ಮೆ ಮುಂಚೆಗೆ ಹೋಗಿ ಭೇಟಿಯಾಗುತಿದ್ದೆ. ಇದೆಲ್ಲಾ ಒಂದೇಡೆಯಾದರೇ, ನಾನು ಮೈಸೂರಿಗೆ ಕೆಲಸ ಹುಡುಕಲು ಬಂದಿದ್ದ ಉದ್ದೇಶ ಇನ್ನೊಂದೆಡೆ. ದಿನಗಳು ಕಳೆದವಾದರೂ, ನನಗೆ ಮೈಸೂರಿನಲ್ಲಿ ಕೆಲಸ ಸಿಗಲಿಲ್ಲ. ಮರಳಿ ನಮ್ಮ ಊರಿಗೆ ಬಂದೆ.
ನಮ್ಮೂರಲ್ಲಿ ೮-೯ ತಿಂಗಳುಗಳು ಕಳೆದವು. ಒಂದು ದಿನ ನನಗೆ ಕ್ಯಾಂಪಸ್ನಲ್ಲಿ ಕೆಲಸ ಸಿಕ್ಕಿದ್ದ ಕಂಪೆನಿಯಿಂದ ಕೆಲಸಕ್ಕೆ ಸೇರಲು ಪತ್ರ ಬಂತು. ಆಶ್ಚರ್ಯವೆನೇಂದರೇ, ನನ್ನ ಟ್ರೈನ್ನಿಂಗ್ ೨ ತಿಂಗಳಿಗಾಗಿ ಮತ್ತೆ ಮೈಸೂರಿನಲ್ಲಿ! ಇನ್ನೂ ಮೈಸೂರಿನ ಋಣ ಮುಗಿದಿರಲಿಲ್ಲವೆನಿಸಿತ್ತು. ಮೈಸೂರಿಗೆ ಬಂದು ಕೆಲಸಕ್ಕೆ ಸೇರಿದೆ. ಟ್ರೈನಿಂಗ್ ನಡೆದ ದಿವಸಗಳ ನಡುವೆ ಒಮ್ಮೆ ಅವಳಿಗೆ ಫೋನ್ ಮಾಡಿ ನನ್ನ ಬಗ್ಗೆ ತಿಳಿಸಿದೆ. ಅವಳಿಗೂ ನಾನು ಬಂದಿದ್ದು ಕೇಳಿ ಖುಶಿಯಾಗಿತ್ತು. ಊಟಕ್ಕೆ ಮನೆಗೆ ಬರಲು ಆಹ್ವಾನವಿತ್ತಳು. ಅವಳ ತಂದೆ ಕೆಲಸದ ಮೇರೆಗೆ ಊರಿಗೆ ಹೋಗಿದ್ದರು, ಅಮ್ಮಳ ಪರಿಚಯವಾಗಿತು. ಮನೆಯನ್ನು ತೋರಿಸುವಾಗ,ಎಲ್ಲೋ ಒಮ್ಮೆಮತ್ತದೇ "ತುಂತುರು" ಹಾಡಿಗೆ ಗುನು-ಗುನಿಸಿದ್ದಳು. ಅವು ಸಮ್ಮೋಹನಗೊಳಿಸುವಂತಹ ಸೆಕೆಂಡುಗಳೇ. ಅವಳೊಂದಿಗೆ ಊಟ ಮಾಡಿ ಹೊರಟು ನಿಂತಾಗ ಉಡುಗೊರೆಯೊಂದನ್ನು ಕೈಗಿತ್ತಳು.ಆ ರಾತ್ರಿ ಕಾಲೇಜಿನ ನೆನಪುಗಳೆಲ್ಲಾ ಮರುಕಳಿಸಿದವು.ಅವಳು ಕೊಟ್ಟ ಆ ಕೃಷ್ಣನ ಗೊಂಬೆ ತಲೆಯ ಹತ್ತಿರವೇ ಇಟ್ಟುಕೊಂಡು ಮಲಗಿದ್ದೆ. ಆಗ ಅನಿಸಿತ್ತು, ನನ್ನ ನಸೀಬ ನನ್ನನ್ನು ಮೈಸೂರಿಗೆ ಮತ್ತೆ ಯಾಕೆ ಕರೆ ತಂದಿತ್ತು ಅಂತಾ.
ಟ್ರೈನ್ನಿಂಗ್ ಮುಗಿದು, ಪುಣೆಗೆ ವರ್ಗಾವಣೆಯಾಯಿತು. ಇನ್ನೂ ಮೇಲಿಂದ ಕೆಲಸ ಶುರು. ಔದ್ಯೊಗಿಕ ಜವಾಬ್ದಾರಿಯನ್ನು ನಿಭಾಯಿಸಿಕೊಂಡಿದ್ದ ತೃಪ್ತಿ ನನ್ನಲಿ ಮೂಡ ತೊಡಗಿತು. ಪುಣೆ ತಲುಪಿ ಕೆಲ ದಿನಗಳ ನಂತರ, ನನ್ನ ಜೀವ ಇಷ್ಟು ಮಟ್ಟಿಗೆ ಇಷ್ಟ ಪಟ್ಟು, ಮೆಚ್ಚುಗೆಯಿಟ್ಟು, ಗೆಳೆತನ ಬೆಳೆಸಿಕೊಂಡ ಆ ಇನ್ನೊಂದು ಜೀವದ ಬಗ್ಗೆ ಯೋಚಿಸತೊಡಗಿತು. ನನ್ನ ಬಾಳ ಸಂಗಾತಿ ಇವಳಾಗಬಹುದೇ ಅನ್ನೊ ಪ್ರಶ್ನೆಗೆ, "ಹೌದು, ಆಗಬಹುದು" ಅನ್ನೊ ಉತ್ತರವನ್ನೇ ಹುಡುಕಿತು. ಉತ್ತರ ಸಿಕ್ಕಾಗ, "ಹೌದು, ಇದೇ ಸರಿ" ಅನ್ನೊದಕ್ಕೆ ಕಾರಣಗಳನ್ನು ಕೂಡಿ ಹಾಕಿತು. ಅವಳ ನೆನಪಿನಲ್ಲಿಯೇ ನನ್ನ ಮನಸ್ಸು ನುಡಿದಿತ್ತು -
ಆ ನಿನ್ನ ಉದ್ದದ ಜಡೆಯ
ಅಪ್ಪಳಿಸಿ ಕುಪ್ಪಳಿಸುತಿದೆ
ನಿನ್ನ ಚೆಲುವಿನ ನಡೆಯು
ಹಿಡಿದು-ಎಳೆದು ಅದನ
ಮುಡಿಸಿ ಮಲ್ಲಿಗೆಯ ಸಿಂಗರಿಸುವೆ
ಬಾ ಗೆಳತಿ
೨ ದಿನಗಳ ನಂತರ ಅವಳಿಗೆ ಫೋನ್ ಹಚ್ಚಿದೆ.ಕುಶಲ-ಕ್ಷೇಮದ ನಾಲ್ಕಾರೂ ಮಾತುಗಳಾಡಿದ ನಂತರ, ವಿಷಯಕ್ಕೆ ಬಂದೆ. ನಾನು ಅವಳ ಮೇಲೆ ಇಟ್ಟ ಜೀವ, ನನ್ನ ಭಾವನೆಗಳನ್ನು ತಿಳಿಸಿದೆ. ಎಲ್ಲವನ್ನು ಸಂಯಮದಿಂದ ಕೇಳಿದಳು. ನನ್ನ ಮಾತುಗಳು ಮುಗಿದ ನಂತರ, ಅವಳು ಮಾತಾಡತೊಡಗಿದಳು. ಅವಳಿಗೆ ತನ್ನ ಬಾಳ ಸಂಗಾತಿಯ ಬಗ್ಗೆ ಬೇರೆ ರೀತಿಯ ಆಯ್ಕೆ, ಅಭಿಪ್ರಾಯಗಳಿರುವುದು ಗೊತ್ತಾಯಿತು. ನೇರವಾಗಿ ಹೇಳಲಿಲ್ಲವಾದರು, ಅವಳ ಮಾತುಗಳಿಂದ ಗೊತ್ತಾಯಿತು. ನನಗೆ ತಿಳಿದ, ನಾನು ಓದಿದ, ಪ್ರೇಮಲೋಕದ ಇತಿಹಾಸ ಪುಟಗಳಲ್ಲಿ, ಹುಡುಗಿಯರು - ಹುಡುಗರನ್ನು ತಿರಸ್ಕ್ರರಿಸಿದಾಗ, ಬರುವ ಕೆಲವು ಮಾತುಗಳು ನನಗೂ ಕೇಳ ಸಿಕ್ಕವು - "ನಾನು ನಿನ್ನ ಈ ದೃಷ್ಟಿಯಿಂದ ನೋಡಿಯೇ ಇಲ್ಲ. ನೀನು ನನಗೊಬ್ಬ ಒಳ್ಳೆಯ ಗೆಳೆಯ" ಅಂತಾ. ಹೌದು, ಒಂದು ಮಾತ್ರ ಖಾತ್ರಿಯಿತ್ತು, ಆ ಮಾತುಗಳೇನೂ ಔಪಚಾರಕ್ಕಾಗಿ ಆಡಿರಲಿಲ್ಲ. ನಾನು ಅವಳಿಗೊಬ್ಬ ಒಳ್ಳೆಯ ಗೆಳೆಯನೇ ಆಗಿದ್ದೆ. ಫೋನ್ ಕೆಳಗಿಟ್ಟು, ಕಣ್ಣಲ್ಲಿ ನೀರನ್ನು ತುಂಬಿಕೊಂಡು, ಮನೆಯ ಕಡೆ ನಡೆದೆ. ಇನ್ನೂ ಬಾಳಿ ಬದುಕಬೇಕಾದ ಜೀವನ, ಆದರೆ, ಅದೇ ಜೀವನದಲ್ಲಿ ಅವಳಿಲ್ಲ. ನಡೆಯುವುದೆಲ್ಲಾ ಒಳ್ಳೆಯದಕ್ಕೆ, ಬಹುಶಃ ನನ್ನ ಪ್ರೇಮ ಚಿಗುರಲು, ನನ್ನ ವಿಧಿ ನನ್ನನ್ನು ಮರಳಿ ಮೈಸೂರಿಗೆ ಕರೆದ್ಯೊದಿತ್ತು ಅಂದು ಕೊಂಡಿದ್ದೆ. ಆದರೆ, ಅದರ ಬರಹದಲ್ಲಿ ಸ್ವಲ್ಪ ಬದಲಾವಣೆಯಾಗಿತ್ತು, "ಅವಳು-ನನಗಾಗಿ" ಯ ಬದಲು ಅದು "ಅವಳಲ್ಲಾ-ನನಗಾಗಿ" ಅಂತ ಅದು ಬರೆದಿತ್ತು. ಪುಣೆಯಲ್ಲಿ ನನಗಾಗ ಯಾರು ಆಪ್ತ ಸ್ನೇಹಿತರಿರಲಿಲ್ಲ. ಮನಸ್ಸು ಬಿಚ್ಚಿ, ಅತ್ತು ಕರೆದು ಮಾಡಿದರೆ ಸಮಾಧಾನ ಮಾಡುವ ನಲ್ಮೆಯ ಸಂಬಂಧಗಳಿನ್ನು ಮೂಡಿರಲಿಲ್ಲ. ಸಂಜೆಯವರೆಗೇ ಆಫೀಸಿನ ಕೆಲಸ, ರಾತ್ರಿ ರೂಂ ಮೇಟ್ಗಳ ಜೊತೆಗೆ ಹೊರಗೆ ಊಟ, ಇದೇ ದಿನಚರಿಯಲ್ಲಿ ಬಹಳ ದಿನಗಳವರೆಗೆ ಏಕಾಂಗಿಯಾಗಿಯೇ ಬದುಕು ಸಾಗಿತು. ಜೀವನದಲ್ಲಿ ಭಾವನೆಗಳಿರಬೇಕು, ಆದರೆ ಭಾವನೆಗಳೇ ಜೀವನವಾಗಬಾರದಂತೆ.ಆದರೆ, ಅದು ಯಾಕೊ, ನನಗೆ ಆಗ ಭಾವನೆಗಳೇ ಜೀವನವಾಗಿಬಿಟ್ಟಿದ್ದವು. ಪ್ರೀತಿ ಕಡಿದು ಹೋಗಿದ್ದರು, ಅವಳ ಜೊತೆಗಿನ ಸ್ನೇಹವನ್ನು ಹಾಗೇ ಉಳಿಸಿಕೊಂಡಿದ್ದೆ. ಕಾಲ ಕಳೆದಂತೆ, ಒಂದು ಅಪಾರ್ಥದಿಂದಾಗಿ, ಅದು ಕಳೆಗುಂದಿ ಮುರಿದುಹೋಯಿತು. ಋತುಗಳು ಉರುಳಿದವು. ಸಮಯ ಸಮವಾಗಿ ವ್ಯಯವಾಯಿತು. ಗಾಯ ತಾನಾಗಿಯೇ ಆಗತೊಡಗಿತು ಮಾಯ. ಆ ಖಿನ್ನ ಕ್ಷಣದ ನೆನಪುಗಳು ಮಾತ್ರ ನನ್ನೊಂದಿಗುಳಿದವು. ಖಿನ್ನತೆಯನ್ನ ಕಾಲ ಚಕ್ರ ಮಾಯವಾಗಿಸಿತು.
ಕೆಲದಿನಗಳ ಹಿಂದೆ ಮತ್ತೊಮ್ಮೆ ಅವಳ ಭೇಟಿಯಾಯಿತು. ನಮ್ಮಿಬ್ಬರ ನಡುವೆ ಮೂಡಿದ ಅಪಾರ್ಥದ ಬಗ್ಗೆಯೇ ಇಬ್ಬರೂ ಮಾತಾಡಿ, ಎಲ್ಲವನ್ನೂ ತಿಳಿಪಡಿಸಿಕೊಂಡೆವು. ಅವಳಿಗೂ ನನ್ನನ್ನೂ ಭೇಟಿಯಾದ್ದದ್ದು ಸಂತೋಷವಾಗಿತ್ತು. ತುಂಬಾ ಹೊತ್ತಿನವರೆಗೆ ಮಾತಾಡಿದೆವು. ನನಗವಳ ಬಗ್ಗೆ ಗೌರವ, ಆತ್ಮೀಯತೆ, ಪ್ರೀತಿ ಇಂದು ಇದೆ. ಅವಳಿಂದು ನನಗೊಬ್ಬ ಆತ್ಮೀಯ ಗೆಳತಿ. ನನಗೆ ತಿಳಿದ ಮಟ್ಟಿಗೆ ನಾನು ಅವಳ ಆತ್ಮೀಯ ಗೆಳೆಯ. ಅವಳು ಹೀಗೊಂದು ತಿರುವುಗಳ ನಡುವೆ ಬಂದ ಕಥೆ-ವ್ಯಥೆ-ನನ್ನ ಸ್ನೇಹಿತೆ.ಮೊನ್ನೆ ಅವಳ ಹುಟ್ಟು ಹಬ್ಬವಿತ್ತು. ವಿದೇಶದಲ್ಲಿರುವ ಅವಳಿಗೆ ಹೀಗೆ ಬರೆದು ಕಳಿಸಿದ್ದೆ -
ಗೆಳತಿ,
ಮರಳಿ ಬಂದ ಈ ಶುಭ ದಿನದ
ಹಾರ್ದಿಕ ಶುಭಾಶಯಗಳು
ಹೊಮ್ಮಲಿ-ಬೆಳೆಯಲಿ
ನಿನ್ನ ಸಂಗೀತದ ಪ್ರತಿಭೆ, ವರ್ಚಸ್ಸು
ಈಚೆಗೂ-ಸಾಗರದ ಆಚೆಗೂ
ಮಂದಸ್ಮಿತ ತುಂಬಿದ ನಿನ್ನ ಕಂಗಳು
ಹೀಗೆಯೇ ಅರಳಿರಲಿ,
ಇಂದಿಗೂ-ಬರುವ ನಾಳೆಗಳಿಗೂ
ಮತ್ತೊಮ್ಮೆ, ಶುಭಾಶಯ...ಶುಭಾಶಯ...
ನಾ ಕೇಳುಗನಿಗೆ ಅದೇ ವರವು
ಆಗುವೆಯಾ ನನ ಗಳತಿ
ಓ ಸಂಗೀತದ ಒಡತಿ
ಎಂದು ಬರೆದು, ನನಗೆ ಪರಿಚಯವಿದ್ದ ಹುಡುಗಿಯೊಬ್ಬಳಿಂದ ಕೊಟ್ಟು ಕಳಿಸಿದೆ. ಕೆಲ ಕ್ಷಣಗಳ ಕಾಲ, ಅವಳು ಹೇಗೆ ಪ್ರತಿಕ್ರಿಯಿಸುತ್ತಾಳೊ ಅನ್ನೊ ಆತಂಕ ಆವರಿಸಿತು. ಹಾಗೇನೂ ಆಗಲಿಲ್ಲ. ನಾನು ಯಾರು ಅಂತಾ ಅವಳಿಗೆ ತಿಳಿದಿರಲಿಲ್ಲವಾದರೂ, ಅವಳು ಸಂತೋಷದಿಂದ ನನ್ನ ಗೆಳೆತನದ ಪತ್ರವನ್ನು ಸ್ವೀಕರಿಸಿದಳು.ನಾನು ಇ-ಮೇಲ್ ಐಡಿ ಕೇಳಿದ್ದರಿಂದ ಅದನ್ನು ಕೊಟ್ಟು ಕಳಿಸಿದ್ದಳು. ಒಮ್ಮೆ ಸುತ್ತಲೂ ಕಣ್ಣಾಡಿಸಿ ನೋಡಿದಳಾದರು, ಇವನೇ ಅಂತಾ ಗೊತ್ತಿಡಿಯೊಕೆ ಹೇಗೆ ಆಗೂತ್ತೆ! ಅಲ್ಲಿ ನಡೆದಿದ್ದ ಬೇರೆ ಕಾರ್ಯಕ್ರಮಗಳನ್ನು ನೋಡಿ, ಬೇರೆ-ಬೇರೆ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಆದರೆ ನನ್ನ ಮನಸ್ಸೆಲ್ಲಾ ಅವಳು, ಆ ಕಾರ್ಡ್, ಆ ಗುಲಾಬಿಗಳಿಂದಲೇ ತುಂಬಿ ಹೋಗಿತ್ತು. ಅವತ್ತಿನಿಂದ, ನನಗವಳು - ಮುಖ ಪರಿಚಯ, ನಾನವಳಿಗೆ - ಮುಖ ಕಾಣದ ಪರಿಚಯ. ನನ್ನಗೊಂದು ರೀತಿಯ ಸಂತೋಷ.
ಕಾಲೇಜ್ ಡೇ ಫಂಕ್ಶನ್ ಮುಗಿಯಿತು. ಮತ್ತೆ ಕ್ಲಾಸ್ಗಳು ಶುರುವಾದವು. ಜೊತೆಗೆ, ನನ್ನ ಗಮನ ಪ್ರೊಜೆಕ್ಟ್ ಕೆಲಸದ ಕಡೆಗೆ ಹರಿಯಿತು. ನನಗೆ ಆ ಸಮಯದಲ್ಲಿ ನನ್ನ ಕೊರ್ಸ್ ಮುಗಿಸುವುದೊಂದೆ ಪ್ರಥಮ ಆದ್ಯತೆಯಾಗಿತ್ತು. ಕೊನೆಯ ವರ್ಷವಾಗಿದ್ದರಿಂದ ಎಲ್ಲಾ ಸರಿಯಾಗಿ ಮುಗಿಸಿಕೊಂಡುಕೊಂಡು ಹೋಗುವ ಜವಾಬ್ದಾರಿ ಹೆಗಲ ಮೇಲೆ ಇತ್ತು. ದಿನಗಳು ಹಾಗೇ ಉರುಳಿದವು. ನನಗವಳ ಇ-ಮೇಲ್ ಐಡಿ ಗೊತ್ತಿದ್ದರಿಂದ ಮೇಲ್ನಲ್ಲೆ ಆಗಾಗ ಮಾತುಕತೆಯಾಗುತ್ತಿತ್ತು. ಕೊನೆಯ ಸೆಮಿಸ್ಟರಿನ ಪರೀಕ್ಷೆಗಳು ಬೀಳ್ಕೊಡುಗೆಯ ಆಲಿಂಗನ ಕೊಡಲು ಬಂದವು. ನನಗವಳ ಫೋನ್ ನಂಬರ್ ಗೊತ್ತಿರಲ್ಲಿಲ್ಲ. ಅವಳ ತರಗತಿಯ ಗೆಳಯನ್ನೊಬ್ಬನಿಗೆ, ನಾನು ಅವಳನ್ನು ಭೇಟಿಯಾಗುವ ಅವಶ್ಯಕತೆಯಿದೆ ಎಂದು ತಿಳಿಸಿದೆ. ಸಹಜವಾಗಿ ಅವನು ಅಪರಿಚಿತನೊಬ್ಬನಿಗೆ ಫೊನ್ ನಂಬರ್ ಕೊಡಲು ನಿರಾಕರಿಸಿದ. ಆದರೆ, ಅವಳಿಗೆ ಫೊನ್ ಮಾಡಿ ಮಾತಾಡಿಸಲು ಒಪ್ಪಿ, ಫೋನ್ ಮಾಡಿ ರಿಸಿವರ್ ನನ್ನ ಕೈಯಲ್ಲಿತ್ತ. "ಹೇ, ಪರೀಕ್ಷೇಗಳು ಮುಗಿಯುತ್ತಿವೆ. ಮುಗಿದ ನಂತರ ನಾನು ಊರಿಗೆ ಹೊರಟು ಹೋಗುತ್ತೇನೆ. ನನ್ನ ಹತ್ತಿರ ನಿನ್ನ ಫೊನ್ ನಂಬರ್ ಇಲ್ಲಾ. ಅದಕ್ಕೆ, ಬೇಕಿತ್ತು" ಅಂದೆ. "ಆಯ್ತು, ಅವನ ಹತ್ತಿರ ಇಸ್ಕೊ" ಅಂತ ಹೇಳಬಹುದೇನೋ ಅಂತಾ ಅಂದುಕೊಂಡಿದ್ದೆ. ಅವಳು - "ಬರೆದು ಕೊ ಹೇಳುತೀನಿ" ಅಂದಳು. ಖುಶಿ ಆಯಿತು. ನಂಬರ್ ಬರೆದುಕೊಂಡು "ಸಾಧ್ಯವಾದರೇ ಸಿಗುತ್ತೇನೆ" ಅಂತಾ ಹೇಳಿ ರಿಸೀವರ್ ಇಟ್ಟೆ.
ಕೊನೆಯ ಸೆಮಿಸ್ಟರ್ನ ಕೊನೆಯ ಪರೀಕ್ಷೆ.ಅದಾದ ನಂತರ, ೨ ದಿನಗಳ ನಂತರ ಮರಳಿ ಗೂಡಿಗೆ, ಅಂದರೆ ಊರಿಗೆ, ಪ್ರಯಾಣ. ಅವಳನ್ನೆಂದು ಭೇಟಿನೇ ಆಗಿರಲಿಲ್ಲಾ. ಬರೀ ಫೋನ್ನಲ್ಲಿ ಮಾತಾಡಿದ್ದಷ್ಟೇ. ನಾನು ಇಂತವನೇ ಅಂತಾ ಅವಳಿಗೇ ಹೇಳಬೇಕೆನಿಸಿತು, ಅವಳು ಯಾವ ರೀತಿ ಅದಕ್ಕೆ ಸ್ಪಂದಿಸುತ್ತಾಳೆ ಅಂತಾ ನೋಡಬೇಕಿತ್ತು. ಒಂದೆಡೆ, ಪರೀಕ್ಷೆಗಳು ಮುಗಿಯುತಿದ್ದಿದ್ದ ನಿರಾಳತೆ. ಇನ್ನೊಂದೆಡೆ, ನಾ - ಸ್ವಲ್ಪ ಬಿದ್ದಿರುವ - ಹುಡುಗಿಯ ಎದುರು ಹೋಗಿ ನಿಲ್ಲುತ್ತಿರುವ ಮೊದಲ ಕ್ಷಣದ, ಮೊದಲ ಅನುಭವದ ಆತಂಕ, ಸಂತೋಷ, ಭಾವಪರವಶತೆ. ಅಂದು, ಪರೀಕ್ಷೆ ಮುಗಿದ ನಂತರ ಅವಳ ಡಿಪಾರ್ಟ್ಮೆಂಟಿನ ಪರೀಕ್ಷೆಯ ಹಾಲ್ ಕಡೆಗೆ ಹೆಜ್ಜೆ ಇಟ್ಟೆ. ನನಗವಳ ಮುಖ ಪರಿಚಯವಿತ್ತು. ಅವಳು ಹಾಲ್ನಿಂದ ಹೊರಗೆ ಬರುತ್ತಿದ್ದಳು. ಅವಳೆಡೇ ದಿಟ್ಟ ಹೆಜ್ಜೆ ಇಟ್ಟೆನಾದರು, ಮೊದಲ ಪರಿಚಯ ನೀಡುವುದರಲ್ಲಿ ಸ್ವಲ್ಪ ಕಷ್ಟವೇ ಪಟ್ಟೆ. ನಾನು ಅಂದುಕೊಂಡ ಹಾಗೇ ಅಂತಹ ಖಾಸ್ ಪ್ರತಿಕ್ರಿಯೆ ಏನು ಸಿಗಲಿಲ್ಲ. ಅವಳು ಸಹಜವಾಗಿ ನಗುಮುಖದಿ, ಪರಸ್ಪರ ಕುಶಲ-ಕ್ಷೇಮದ ಎರಡು ಮಾತಾಡಿ ಅಲ್ಬಿದಾ ಎಂದು ಹೊರಟಳು. ಮನಸ್ಸು -
ಗೆಳತಿ,
ನಿನ್ನ ಈ ಸುಂದರ ನಡೆ
ಬರಲಿ ನನ್ನಯ ಕಡೆ
ಅಂತ ನುಡಿಯುತ್ತಿತ್ತು. ಕಾಲೇಜು ಹಂತ ಮುಗಿಯಿತು. ಮರಳಿ ಊರಿಗೆ ಬಂದೆ. ಕ್ಯಾಂಪಸ್ನಲ್ಲಿ ನನಗೆ ಆಗಲೇ ಕೆಲಸ ಸಿಕ್ಕಿತ್ತು. ಕೆಲಸಕ್ಕೆ ಸೇರಲು ಇನ್ನೂ ಒಂದು ತಿಂಗಳ ಸಮಯವಿತ್ತು. ಆದರೆ, ದುರಾದೃಷ್ಟವಶಾತ್ ಅಮೇರಿಕಾದ ಅರ್ಥಿಕ ಹಿಂಜರಿತದಿಂದಾಗಿ ನನ್ನ ಕೆಲಸ ೮-೯ ತಿಂಗಳುಗಳವರೆಗೆ ಮುಂದೆ ಬಿತ್ತು. ಬೇರೆ ಕೆಲಸ ಹುಡುಕೋಣ ಎಂದು ಮೈಸೂರಿಗೆ ಮರಳಿ ಬಂದೆ. ನನ್ನ ಹಾಗೇ ಕೆಲಸ ಕಳೆದುಕೊಂಡ ನನ್ನ ಕೆಲವು ಗೆಳೆಯರು ಕೂಡ ಮೈಸೂರಿಗೆ ಬಂದಿದ್ದರು. ಅದೇ ತಿಂಗಳಿನಲ್ಲಿ ನಾನು ಓದಿದ ಕಾಲೇಜಿನಲ್ಲಿ ಒಂದು ವ್ಯಕ್ತಿತ್ವ ವಿಕಸನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾನು ಅದರಲ್ಲಿ ಭಾಗವಹಿಸಿದೆ. ನನ್ನ ಅಚ್ಚರಿಗೆ, ಅದರಲ್ಲಿ ಅವಳೂ ಭಾಗವಹಿಸಿದ್ದಳು. ಆ ಕಾರ್ಯಕ್ರಮದ ಮೊದಲ ದಿನದಂದು ಹೊರಗೆ ಬಂದಾಗ ನಾನು-ಅವಳು ಜೊತೆಗೆ ಬಂದಿದ್ದೇವು. ಕೊನೆಯ ಪರೀಕ್ಷೇ ಮುಗಿದ ನಂತರ ಮಾತಾಡಿದ್ದು ಮತ್ತೆಂದೂ ಮಾತಾಡಿರಲಿಲ್ಲ, ಇ-ಮೇಲ್ ಕೂಡಾ ಮಾಡಿರಲಿಲ್ಲ. ಇಬ್ಬರಲ್ಲೂ ಒಂದು ರೀತಿಯ ಸಂಕೋಚ ತುಂಬಿಕೊಂಡಿತ್ತು. ಅಕ್ಕ-ಪಕ್ಕದಲ್ಲೇ ನಡೆದುಕೊಂಡು ಹೋಗುತ್ತಿದ್ದರು, ಮಾತು ಬರುತ್ತಿರಲಿಲ್ಲ. ಕೊನೆಗೆ ನಾನೇ - "ಹಾಯ್" ಎಂದೇ. ಅಲ್ಲಿಂದ ಮಾತುಗಳು ಶುರುವಾದವು. ಆ ಒಂದೇ ದಿನದಲ್ಲಿ ನನಗವಳು ಎಷ್ಟೊ ಪರಿಚಯವಾಗಿಬಿಟ್ಟಳು. ಮೈಸೂರಿನಲ್ಲೇ ಉಳಿದ ಅದೇ ದಿನಗಳಲ್ಲಿ ಅವಳ ಸಂಗೀತ ಕಛೇರಿಗಳಿಗೆ ಹೋಗುತಿದ್ದೆ. ಕೆಲವೊಮ್ಮೆ ಮುಂಚೆಗೆ ಹೋಗಿ ಭೇಟಿಯಾಗುತಿದ್ದೆ. ಇದೆಲ್ಲಾ ಒಂದೇಡೆಯಾದರೇ, ನಾನು ಮೈಸೂರಿಗೆ ಕೆಲಸ ಹುಡುಕಲು ಬಂದಿದ್ದ ಉದ್ದೇಶ ಇನ್ನೊಂದೆಡೆ. ದಿನಗಳು ಕಳೆದವಾದರೂ, ನನಗೆ ಮೈಸೂರಿನಲ್ಲಿ ಕೆಲಸ ಸಿಗಲಿಲ್ಲ. ಮರಳಿ ನಮ್ಮ ಊರಿಗೆ ಬಂದೆ.
ನಮ್ಮೂರಲ್ಲಿ ೮-೯ ತಿಂಗಳುಗಳು ಕಳೆದವು. ಒಂದು ದಿನ ನನಗೆ ಕ್ಯಾಂಪಸ್ನಲ್ಲಿ ಕೆಲಸ ಸಿಕ್ಕಿದ್ದ ಕಂಪೆನಿಯಿಂದ ಕೆಲಸಕ್ಕೆ ಸೇರಲು ಪತ್ರ ಬಂತು. ಆಶ್ಚರ್ಯವೆನೇಂದರೇ, ನನ್ನ ಟ್ರೈನ್ನಿಂಗ್ ೨ ತಿಂಗಳಿಗಾಗಿ ಮತ್ತೆ ಮೈಸೂರಿನಲ್ಲಿ! ಇನ್ನೂ ಮೈಸೂರಿನ ಋಣ ಮುಗಿದಿರಲಿಲ್ಲವೆನಿಸಿತ್ತು. ಮೈಸೂರಿಗೆ ಬಂದು ಕೆಲಸಕ್ಕೆ ಸೇರಿದೆ. ಟ್ರೈನಿಂಗ್ ನಡೆದ ದಿವಸಗಳ ನಡುವೆ ಒಮ್ಮೆ ಅವಳಿಗೆ ಫೋನ್ ಮಾಡಿ ನನ್ನ ಬಗ್ಗೆ ತಿಳಿಸಿದೆ. ಅವಳಿಗೂ ನಾನು ಬಂದಿದ್ದು ಕೇಳಿ ಖುಶಿಯಾಗಿತ್ತು. ಊಟಕ್ಕೆ ಮನೆಗೆ ಬರಲು ಆಹ್ವಾನವಿತ್ತಳು. ಅವಳ ತಂದೆ ಕೆಲಸದ ಮೇರೆಗೆ ಊರಿಗೆ ಹೋಗಿದ್ದರು, ಅಮ್ಮಳ ಪರಿಚಯವಾಗಿತು. ಮನೆಯನ್ನು ತೋರಿಸುವಾಗ,ಎಲ್ಲೋ ಒಮ್ಮೆಮತ್ತದೇ "ತುಂತುರು" ಹಾಡಿಗೆ ಗುನು-ಗುನಿಸಿದ್ದಳು. ಅವು ಸಮ್ಮೋಹನಗೊಳಿಸುವಂತಹ ಸೆಕೆಂಡುಗಳೇ. ಅವಳೊಂದಿಗೆ ಊಟ ಮಾಡಿ ಹೊರಟು ನಿಂತಾಗ ಉಡುಗೊರೆಯೊಂದನ್ನು ಕೈಗಿತ್ತಳು.ಆ ರಾತ್ರಿ ಕಾಲೇಜಿನ ನೆನಪುಗಳೆಲ್ಲಾ ಮರುಕಳಿಸಿದವು.ಅವಳು ಕೊಟ್ಟ ಆ ಕೃಷ್ಣನ ಗೊಂಬೆ ತಲೆಯ ಹತ್ತಿರವೇ ಇಟ್ಟುಕೊಂಡು ಮಲಗಿದ್ದೆ. ಆಗ ಅನಿಸಿತ್ತು, ನನ್ನ ನಸೀಬ ನನ್ನನ್ನು ಮೈಸೂರಿಗೆ ಮತ್ತೆ ಯಾಕೆ ಕರೆ ತಂದಿತ್ತು ಅಂತಾ.
ಟ್ರೈನ್ನಿಂಗ್ ಮುಗಿದು, ಪುಣೆಗೆ ವರ್ಗಾವಣೆಯಾಯಿತು. ಇನ್ನೂ ಮೇಲಿಂದ ಕೆಲಸ ಶುರು. ಔದ್ಯೊಗಿಕ ಜವಾಬ್ದಾರಿಯನ್ನು ನಿಭಾಯಿಸಿಕೊಂಡಿದ್ದ ತೃಪ್ತಿ ನನ್ನಲಿ ಮೂಡ ತೊಡಗಿತು. ಪುಣೆ ತಲುಪಿ ಕೆಲ ದಿನಗಳ ನಂತರ, ನನ್ನ ಜೀವ ಇಷ್ಟು ಮಟ್ಟಿಗೆ ಇಷ್ಟ ಪಟ್ಟು, ಮೆಚ್ಚುಗೆಯಿಟ್ಟು, ಗೆಳೆತನ ಬೆಳೆಸಿಕೊಂಡ ಆ ಇನ್ನೊಂದು ಜೀವದ ಬಗ್ಗೆ ಯೋಚಿಸತೊಡಗಿತು. ನನ್ನ ಬಾಳ ಸಂಗಾತಿ ಇವಳಾಗಬಹುದೇ ಅನ್ನೊ ಪ್ರಶ್ನೆಗೆ, "ಹೌದು, ಆಗಬಹುದು" ಅನ್ನೊ ಉತ್ತರವನ್ನೇ ಹುಡುಕಿತು. ಉತ್ತರ ಸಿಕ್ಕಾಗ, "ಹೌದು, ಇದೇ ಸರಿ" ಅನ್ನೊದಕ್ಕೆ ಕಾರಣಗಳನ್ನು ಕೂಡಿ ಹಾಕಿತು. ಅವಳ ನೆನಪಿನಲ್ಲಿಯೇ ನನ್ನ ಮನಸ್ಸು ನುಡಿದಿತ್ತು -
ಆ ನಿನ್ನ ಉದ್ದದ ಜಡೆಯ
ಅಪ್ಪಳಿಸಿ ಕುಪ್ಪಳಿಸುತಿದೆ
ನಿನ್ನ ಚೆಲುವಿನ ನಡೆಯು
ಹಿಡಿದು-ಎಳೆದು ಅದನ
ಮುಡಿಸಿ ಮಲ್ಲಿಗೆಯ ಸಿಂಗರಿಸುವೆ
ಬಾ ಗೆಳತಿ
೨ ದಿನಗಳ ನಂತರ ಅವಳಿಗೆ ಫೋನ್ ಹಚ್ಚಿದೆ.ಕುಶಲ-ಕ್ಷೇಮದ ನಾಲ್ಕಾರೂ ಮಾತುಗಳಾಡಿದ ನಂತರ, ವಿಷಯಕ್ಕೆ ಬಂದೆ. ನಾನು ಅವಳ ಮೇಲೆ ಇಟ್ಟ ಜೀವ, ನನ್ನ ಭಾವನೆಗಳನ್ನು ತಿಳಿಸಿದೆ. ಎಲ್ಲವನ್ನು ಸಂಯಮದಿಂದ ಕೇಳಿದಳು. ನನ್ನ ಮಾತುಗಳು ಮುಗಿದ ನಂತರ, ಅವಳು ಮಾತಾಡತೊಡಗಿದಳು. ಅವಳಿಗೆ ತನ್ನ ಬಾಳ ಸಂಗಾತಿಯ ಬಗ್ಗೆ ಬೇರೆ ರೀತಿಯ ಆಯ್ಕೆ, ಅಭಿಪ್ರಾಯಗಳಿರುವುದು ಗೊತ್ತಾಯಿತು. ನೇರವಾಗಿ ಹೇಳಲಿಲ್ಲವಾದರು, ಅವಳ ಮಾತುಗಳಿಂದ ಗೊತ್ತಾಯಿತು. ನನಗೆ ತಿಳಿದ, ನಾನು ಓದಿದ, ಪ್ರೇಮಲೋಕದ ಇತಿಹಾಸ ಪುಟಗಳಲ್ಲಿ, ಹುಡುಗಿಯರು - ಹುಡುಗರನ್ನು ತಿರಸ್ಕ್ರರಿಸಿದಾಗ, ಬರುವ ಕೆಲವು ಮಾತುಗಳು ನನಗೂ ಕೇಳ ಸಿಕ್ಕವು - "ನಾನು ನಿನ್ನ ಈ ದೃಷ್ಟಿಯಿಂದ ನೋಡಿಯೇ ಇಲ್ಲ. ನೀನು ನನಗೊಬ್ಬ ಒಳ್ಳೆಯ ಗೆಳೆಯ" ಅಂತಾ. ಹೌದು, ಒಂದು ಮಾತ್ರ ಖಾತ್ರಿಯಿತ್ತು, ಆ ಮಾತುಗಳೇನೂ ಔಪಚಾರಕ್ಕಾಗಿ ಆಡಿರಲಿಲ್ಲ. ನಾನು ಅವಳಿಗೊಬ್ಬ ಒಳ್ಳೆಯ ಗೆಳೆಯನೇ ಆಗಿದ್ದೆ. ಫೋನ್ ಕೆಳಗಿಟ್ಟು, ಕಣ್ಣಲ್ಲಿ ನೀರನ್ನು ತುಂಬಿಕೊಂಡು, ಮನೆಯ ಕಡೆ ನಡೆದೆ. ಇನ್ನೂ ಬಾಳಿ ಬದುಕಬೇಕಾದ ಜೀವನ, ಆದರೆ, ಅದೇ ಜೀವನದಲ್ಲಿ ಅವಳಿಲ್ಲ. ನಡೆಯುವುದೆಲ್ಲಾ ಒಳ್ಳೆಯದಕ್ಕೆ, ಬಹುಶಃ ನನ್ನ ಪ್ರೇಮ ಚಿಗುರಲು, ನನ್ನ ವಿಧಿ ನನ್ನನ್ನು ಮರಳಿ ಮೈಸೂರಿಗೆ ಕರೆದ್ಯೊದಿತ್ತು ಅಂದು ಕೊಂಡಿದ್ದೆ. ಆದರೆ, ಅದರ ಬರಹದಲ್ಲಿ ಸ್ವಲ್ಪ ಬದಲಾವಣೆಯಾಗಿತ್ತು, "ಅವಳು-ನನಗಾಗಿ" ಯ ಬದಲು ಅದು "ಅವಳಲ್ಲಾ-ನನಗಾಗಿ" ಅಂತ ಅದು ಬರೆದಿತ್ತು. ಪುಣೆಯಲ್ಲಿ ನನಗಾಗ ಯಾರು ಆಪ್ತ ಸ್ನೇಹಿತರಿರಲಿಲ್ಲ. ಮನಸ್ಸು ಬಿಚ್ಚಿ, ಅತ್ತು ಕರೆದು ಮಾಡಿದರೆ ಸಮಾಧಾನ ಮಾಡುವ ನಲ್ಮೆಯ ಸಂಬಂಧಗಳಿನ್ನು ಮೂಡಿರಲಿಲ್ಲ. ಸಂಜೆಯವರೆಗೇ ಆಫೀಸಿನ ಕೆಲಸ, ರಾತ್ರಿ ರೂಂ ಮೇಟ್ಗಳ ಜೊತೆಗೆ ಹೊರಗೆ ಊಟ, ಇದೇ ದಿನಚರಿಯಲ್ಲಿ ಬಹಳ ದಿನಗಳವರೆಗೆ ಏಕಾಂಗಿಯಾಗಿಯೇ ಬದುಕು ಸಾಗಿತು. ಜೀವನದಲ್ಲಿ ಭಾವನೆಗಳಿರಬೇಕು, ಆದರೆ ಭಾವನೆಗಳೇ ಜೀವನವಾಗಬಾರದಂತೆ.ಆದರೆ, ಅದು ಯಾಕೊ, ನನಗೆ ಆಗ ಭಾವನೆಗಳೇ ಜೀವನವಾಗಿಬಿಟ್ಟಿದ್ದವು. ಪ್ರೀತಿ ಕಡಿದು ಹೋಗಿದ್ದರು, ಅವಳ ಜೊತೆಗಿನ ಸ್ನೇಹವನ್ನು ಹಾಗೇ ಉಳಿಸಿಕೊಂಡಿದ್ದೆ. ಕಾಲ ಕಳೆದಂತೆ, ಒಂದು ಅಪಾರ್ಥದಿಂದಾಗಿ, ಅದು ಕಳೆಗುಂದಿ ಮುರಿದುಹೋಯಿತು. ಋತುಗಳು ಉರುಳಿದವು. ಸಮಯ ಸಮವಾಗಿ ವ್ಯಯವಾಯಿತು. ಗಾಯ ತಾನಾಗಿಯೇ ಆಗತೊಡಗಿತು ಮಾಯ. ಆ ಖಿನ್ನ ಕ್ಷಣದ ನೆನಪುಗಳು ಮಾತ್ರ ನನ್ನೊಂದಿಗುಳಿದವು. ಖಿನ್ನತೆಯನ್ನ ಕಾಲ ಚಕ್ರ ಮಾಯವಾಗಿಸಿತು.
ಕೆಲದಿನಗಳ ಹಿಂದೆ ಮತ್ತೊಮ್ಮೆ ಅವಳ ಭೇಟಿಯಾಯಿತು. ನಮ್ಮಿಬ್ಬರ ನಡುವೆ ಮೂಡಿದ ಅಪಾರ್ಥದ ಬಗ್ಗೆಯೇ ಇಬ್ಬರೂ ಮಾತಾಡಿ, ಎಲ್ಲವನ್ನೂ ತಿಳಿಪಡಿಸಿಕೊಂಡೆವು. ಅವಳಿಗೂ ನನ್ನನ್ನೂ ಭೇಟಿಯಾದ್ದದ್ದು ಸಂತೋಷವಾಗಿತ್ತು. ತುಂಬಾ ಹೊತ್ತಿನವರೆಗೆ ಮಾತಾಡಿದೆವು. ನನಗವಳ ಬಗ್ಗೆ ಗೌರವ, ಆತ್ಮೀಯತೆ, ಪ್ರೀತಿ ಇಂದು ಇದೆ. ಅವಳಿಂದು ನನಗೊಬ್ಬ ಆತ್ಮೀಯ ಗೆಳತಿ. ನನಗೆ ತಿಳಿದ ಮಟ್ಟಿಗೆ ನಾನು ಅವಳ ಆತ್ಮೀಯ ಗೆಳೆಯ. ಅವಳು ಹೀಗೊಂದು ತಿರುವುಗಳ ನಡುವೆ ಬಂದ ಕಥೆ-ವ್ಯಥೆ-ನನ್ನ ಸ್ನೇಹಿತೆ.ಮೊನ್ನೆ ಅವಳ ಹುಟ್ಟು ಹಬ್ಬವಿತ್ತು. ವಿದೇಶದಲ್ಲಿರುವ ಅವಳಿಗೆ ಹೀಗೆ ಬರೆದು ಕಳಿಸಿದ್ದೆ -
ಗೆಳತಿ,
ಮರಳಿ ಬಂದ ಈ ಶುಭ ದಿನದ
ಹಾರ್ದಿಕ ಶುಭಾಶಯಗಳು
ಹೊಮ್ಮಲಿ-ಬೆಳೆಯಲಿ
ನಿನ್ನ ಸಂಗೀತದ ಪ್ರತಿಭೆ, ವರ್ಚಸ್ಸು
ಈಚೆಗೂ-ಸಾಗರದ ಆಚೆಗೂ
ಮಂದಸ್ಮಿತ ತುಂಬಿದ ನಿನ್ನ ಕಂಗಳು
ಹೀಗೆಯೇ ಅರಳಿರಲಿ,
ಇಂದಿಗೂ-ಬರುವ ನಾಳೆಗಳಿಗೂ
ಮತ್ತೊಮ್ಮೆ, ಶುಭಾಶಯ...ಶುಭಾಶಯ...